ಕಂದರ

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.

ಜಾತಿ ಮತ ಬೇರೆ ಬೇರ
ರೀತಿ ನೀತಿ ಬೇರೆ ಬೇರೆ
ಅಲ್ಲೆ ಇದೆ ಭೇದಭಾವ
ಒಬ್ಬರನ್ನೊಬ್ಬರು ದ್ವೇಷಿಸುವ ಮನೋಭಾವ

ಮಾತು ಬೇರೆ ಆಚಾರ ಬೇರೆ
ನಡೆಗೂ ನುಡಿಗೂ ನಡುವೆ ದೊಡ್ಡ ಕಂದರ.
ಅದಕ್ಕೇ ದ್ವೇಷ, ಮತ್ಸರ, ಒಳಜಗಳ
ಕೋಮುವಾದ, ಬಾಂಬು ದಾಳಿ.

ದೇವರೊಬ್ಬನೆ ರೂಪ ಹಲವು
ಮಂದಿರ ಮಸೀದಿ ಇಗರ್ಜಿ
ಪ್ರತಿಷ್ಠಾಪಿಸಿದ್ದೇವೆ ಒಬ್ಬೊಬ್ಬರ
ನಾವು ಕಟ್ಟಿದ ಗರ್ಭಗುಡಿಗಳಲ್ಲಿ!

ರಾಮ ಮ೦ದಿರ
ಬಾಬರಿ ಮಸೀದಿ ಜಗಳದಲ್ಲಿ
ವರುಷವರುಷವೂ ಕೊಡುತ್ತೇವೆ
ಪವಿತ್ರ ನೆಲಕೆ ರಕ್ತತರ್ಪಣ!

ನಾವು ನೀವು ಎಲ್ಲರೊಂದೆ
ಆ ದೇವರ ಮುಂದೆ
ಆದರೆ ಎಲ್ಲರೂ ಬೇರೆ ಬೇರೆ
ಕಾಣದಿರುವ ಅವನ ಹಿಂದೆ.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಎಲ್ಲಿರುವೆ ವಾಣಿ, ಮರೆತೆಯ ಹೇಗೆ ಇಷ್ಟು ದಿನ
Next post ಪೂರ್‍ಣ ಫಲ

ಸಣ್ಣ ಕತೆ

  • ಮರೀಚಿಕೆ

    ನಂಬಿದರೆ ನಂಬಿ ಬಿಟ್ಟರೆ ಬಿಡಿ ನನ್ನೆಲ್ಲಾ ಭಾವನೆಗಳೂ ತಬ್ಬಲಿಗಳಾಗಿಬಿಟ್ಟಿವೆ. ಪ್ರೇಮವೆಂದರೆ ತ್ಯಾಗವೆ, ಭೋಗವೆ, ಭ್ರಮೆಯೆ ಆಥವಾ ಕೇವಲ ದಾಸ್ಯವೆ? ಮನಸ್ಸಿಗಾದ ಗ್ಯಾಂಗ್ರಿನ್ ಕಾಯಿಲೆಯೆ? ಇಂತಹ ದುರಾರೋಚನೆಗಳು ಹುಟ್ಟಲು… Read more…

  • ಕರೀಮನ ಪಿಟೀಲು

    ಕರೀಮನ ಹತ್ತಿರ ಒಂದು ಪಿಟೀಲು ಇದೆ. ಅದನ್ನು ಅವನು ಒಳ್ಳೆ ಮಧುರವಾಗಿ ಬಾರಿಸುತ್ತಾನೆ. ಬಾರಿಸುತ್ತ ಒಮ್ಮೊಮ್ಮೆ ಭಾವಾವೇಶದಲ್ಲಿ ತನ್ನನ್ನು ತಾನು ಮರೆತುಬಿಡುತ್ತಾನೆ. ಕರೀಮನ ಪಿಟೀಲುವಾದವೆಂದರೆ ಊರ ಜನರೆಲ್ಲರೂ… Read more…

  • ಕತೆಗಾಗಿ ಜತೆ

    ರಾಜರ ಮನಿಲಿ ವಂದ್ ಮಡವಾಳವ ಬಟ್ಟೆ ಶೆಳೀಲಿಕ್ಕಿದಿದ್ದ. ಅವನಿಗೆ ನೆಂಟ್ರ ಮನಿಗೆ ವಂದಿವ್ಸ ಹೋಗಬೇಕು ಹೇಳಿರೆ ಸೌಡಾಗುದಿಲ್ಲ. ನಿತ್ಯೆ ಬಟ್ಟೆ ಶೆಳುದ್ ವಂದೇಯ. ವಂದಾನೊಂದ ದಿವಸ ಇವತ್… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ವಿಷಚಕ್ರ

    "ಚಂದ್ರು, ಒಳಗೆ ಬಾಮ್ಮ. ಮಳೆ ಬರುತ್ತೆ." ತಾಯಿ ಕೂಗಿದುದನ್ನು ಕೇಳಿ ಚಂದ್ರು ನಕ್ಕ. ಒಳಕ್ಕೆ ಬರುವುದಿರಲಿ, ಪಕ್ಕದ ಮನೆಯ ಹುಡುಗಿ ವೇದಳೊಂದಿಗೆ ಆಡುತ್ತಿದ್ದುದನ್ನು ನಿಲ್ಲಿಸಲೂ ಇಲ್ಲ. "ನೋಡೇ-ನಾನು… Read more…

cheap jordans|wholesale air max|wholesale jordans|wholesale jewelry|wholesale jerseys